Monday, December 17, 2012

ಬದುಕಿನ ಬದುಕು ನೀ..........

  ನನ್ನೊಲವ ದಾರಿಯಲಿ ಬರಬೇಕೆನ್ನುವ

 ಪ್ರೀತಿಯ   ಹೆಜ್ಜೆಗಳಲಿ

ನೀನೆಂದು ಬಂದು ಸಾಗುವೆ

ಕಣ್ಣಿನಲಿ ಕಣ್ಣಂತೆ ಕಾಯುತಿರುವ

ಮನಸು ಕನಸುಗಳ

ಪಿಸುಮಾತುಗಳು.....

ನನ್ನ ಮನವು ಇಂದಿಗೂ ಎಂದಿಗೂ

ಹೇಳುತಿದೆ  ಕನಸುಗಳು

ನನಸಾಗುವಂತಿದ್ದರೆ

ನಿನ್ನ ಜೊತೆಗೇ ಎಷ್ಟು ಸುಂದರವೆಂದು,

ನೀ ಕಟ್ಟುವ ಪ್ರೀತಿ ಸೌಧದಲಿ

ನನಗೆ ಜಾಗವಿದೆಯೆಂದರೆ

ಕಟ್ಟೋಣ ಬದುಕನ್ನೂ....

ಕಣ್ಣಿನ ಕ್ಯಾಮರಾದಲಿ ತೆಗೆದ

ಫೋಟೋವನ್ನು ಹೃದಯದಲಿ

ಕಟ್ಟಿಸಿಡಲೇ ..

ನೀ ಹಣತೆ ಹಚ್ಚುವೆಯಾದರೆ

ಅದರ ಬೆಳಕು ನಾನುಗುವೆ ನಿನಗೆ

ದಾರಿಯುದ್ದಕ್ಕೂ ಎಂದಿಗೂ

ಕೊನೆಯವರೆಗೂ ...

ಖಾಲಿಯಾಗದ ಒಂದಷ್ಟು ಭಾವನೆಗಳ

ಲೋಕದಲಿ

ನಾನು ನೀನು ಮಾತ್ರ..

ಬದುಕಿನಲ್ಲಿಯ ಬದುಕು ನೀನು.

Tuesday, December 11, 2012

ಪರಿಹಾರವಿಲ್ಲವೇ??

ಹಗಲು ಅಮವಾಸ್ಯೆ ಕವಿದ
ಬದುಕಿನ ಆಗಸದಲಿ
ಒಂದುಹೊತ್ತಿನ ಅನ್ನಕ್ಕಾಗಿ ಪರದಾಡುವ ,
ಯಾರದ್ದೋ ಮನೆಯ ಪಾತ್ರೆ ತೊಳೆದು
ದುಡಿಯುವಳು ಆಕೆ ತನ್ನವರಿಗಾಗಿ
ಒಂದೆಡೆ ಭೃಷ್ಟಾಚಾರದ ನಾಟ್ಯವಾದರೆ
ಇನ್ನೊಂದೆಡೆ ಬಡತನದ ಬೇಗೆ
ರೋಗ ರುಜಿನಗಳ ಕೊರತೆ
ಎಂದೂ ವಾಸಿಯಾಗದ ಗಾಯದ ಕಲೆಗಳು
ಹಸಿವಿನಿಂದ ಬಳಲಿದ ಜೀವಕೆ
ವಿಟಮಿನ್ ಕೊರತೆಯೆಂದರು ವೈದ್ಯರು,
ಕುಡಿತಕ್ಕಾಗಿ ಹಣ ಬೇಕೆಂದು
ಹೊಡೆಯುವ ಗಂಡ ಒಂದೆಡೆಯಾದರೆ
ಚಾಕಲೇಟ್ ಕೊಡಿಸಮ್ಮ  ಎಂದು ಅಳುವ ಕಂದಮ್ಮಗಳು
ಏನಾದರೂ ಸಹಾಯ ಮಾಡಿ ಎಂದು ಬೇಡಿದರೆ
ನೋಡಿ ನಗುವವರು ಬಿಟ್ಟರೆ
ಕೇಳುವವರು ಯಾರು??
ಅಪರೂಪದ ಖಾಯಿಲೆಗೆ
ಬೆಟ್ಟದ ಸೊಪ್ಪೇ ಔಷಧ
ಸಂಕವಿಲ್ಲದ ಹಳ್ಳವ ದಾಟಿ ಹೋಗಬೇಕು
ಚಪ್ಪಲಿಗಳಿಲ್ಲದ ಕಾಲಿಗೆ ಮುಳ್ಳು ಚುಚ್ಚಿದರೆ ಕೇಳುವವರಿಲ್ಲ
ಜೋರು ಮಳೆ ಬಂದರೆ ಹಾರಿ ಹೋಗುವ ಮನೆ
ಪ್ರತೀ ಕ್ಷಣವೂ ಬಡತನದ ಚಿಂತೆ
 ಹೇಗೆ ದುಡಿಯಲಿ ಎಂದು ಚಿಂತಿಸುವುದರೊಳಗೆ ಮಾನಸಿಕ ಕಿರುಕುಳ
ಅವಳಿಗೂ ಮನಸು, ಕನಸು ಎಲ್ಲವೂ ಇದ್ದು
ಅರ್ಥ ಮಾಡಿಕೊಂಡ ಹೃದಯವಿಲ್ಲ
ಅಡಗಿರುವ ಅವ್ಯಕ್ತ ಭಾವನೆಗಳಿಗೆ
ಉತ್ತರವೆಂದೂ ಸಿಗಬಹುದೇ?
ಅಮವಾಸ್ಯೆ ಕಳೆದು ಒಂದು ಚೂರಾದರೂ ಬೆಳಕು
ಹರಿದರೆ ಎಂಬ ಆಶಯ
ಎಂದು ಸಿಗಬಹುದು ಪ್ರಪಂಚದಲ್ಲಿರುವ  ಬಡವರಿಗೆ
ಪರಿಹಾರ??
ಮಕ್ಕಳಿಗೆ ಸರಿಯಾದ ಉಪಹಾರ?
ಹತಾಶೆ ನೋವು ಬದುಕು ಒಡ್ಡಿದ ಪರೀಕ್ಷೆಗೆ
ಎಂದೂ ಕಾಯುತ್ತಿರಬೇಕೆ?







Friday, November 30, 2012

ಖುಷಿಯ ಗಂಟನ್ನು ಇರಿಸಿದ್ದವು

ಮೂಡಣದಿ ಸೂರ್ಯನ ನಸುಗೆಂಪು
ಕೆನ್ನೆಯ ಆಗಸವು
ನಾಚುತ್ತಾ ಸ್ವಾಗತಿಸುತಿತ್ತು
ಪ್ರೀತಿಯಲಿ ನೇಸರನ ತುಸು ಬೆಳಕು
ಅಂಬರವ ಹೊಳೆಯುವಂತೆ ಮಾಡಿತ್ತು
ಹಕ್ಕಿಗಳೂ ಜೊತೆ ಸೇರಿ ಹಾಡುತ್ತಾ
ಸಂಗೀತವ ಆಲಿಸುವಂತೆ ಮಾಡಿದ್ದವು
ಭಾವನೆಗಳ ಲೋಕದಲಿ
ಪಯಣಿಸುತ್ತಿದ್ದ ನಾ....ಮರೆತಿದ್ದೆ ನನ್ನನ್ನೇ!!
ತಂಗಾಳಿಯ ಹಿತ ಸ್ಪರ್ಶವು
ಒಂದಷ್ಟು  ಕನಸುಗಳನು
ಹೊತ್ತು ತಂದಿದ್ದವು,
ಇಬ್ಬನಿಯು ಮುತ್ತಿನಂತೇ
ಹೊಳೆಯುತ್ತಾ
ಖುಷಿಯ ಗಂಟನ್ನು ನನ್ನಲ್ಲಿ
ಇರಿಸಿದ್ದವು,
ಒಂಟಿತನವೆಲ್ಲಾ ಮರೆತು
ನಿಸರ್ಗದ ಸಹಜ ಸುಂದರತೆಗೆ
ನನ್ನೀ ಹೃದಯವು ಸೇರಿ ಹೋಗಿತ್ತು..





Monday, November 05, 2012

ಅಂತರಂಗದ ಕನಸುಗಳು


ಮನದ ಗೋಡೆಯೊಳಗೆ ಕಟ್ಟಿಟ್ಟ

ಕನಸು

ಅಂತರಂಗದ ಮಾತುಗಳಿಗೆ 

ಹಾಡು ಬರೆಯಲು

ಹೊರಟಾಗ ಪ್ರೀತಿಯ ಬಗೆಗೆ 

ಬರೆದುಬಿಡುತ್ತೆ ಅರಿವಿಲ್ಲದೆಯೇ

ಭಾವನೆಗಳ ಸಂಗಮದಲ್ಲಿ 

ಒಲವೆಂಬ ನಂಟು ಬೇಕೆನಿಸಿ

 ನನ್ನ ಹೃದಯದೊಳಗೇ ಹೇಳಲಾರದ 

ವರ್ಣಿಸಲಾಗದ  

ಒಂದಷ್ಟು ಕನಸಿನ ಮೂಟೆಗಳು

ಬಂದ ಹಾಗೆ ಬದುಕನ್ನು ಸ್ವೀಕರಿಸುವುದಕ್ಕಿಂತ

ಬೇಕಾದ ಹಾಗೆ ರೂಪಿಸಿಕೊಳ್ಳುವ 

ನನ್ನ ಬದುಕಿನ ಶಿಲ್ಪಿಯು ನಾನಾಗಬೇಕೆಂದು..

 

 

Tuesday, October 23, 2012

ನಿದ್ರೆಯನ್ನು ಹುಡುಕಿದೆ........

ಪರೀಕ್ಷೆಯೇನೋ ಮುಗೀತು ..ಸರಿಯಾಗಿ ನಿದ್ರೆ ಮಾಡ್ದೇ ಎಷ್ಟೋಂದು ದಿನ ಆಯ್ತು.. ನಿನ್ನೆ ಪರೀಕ್ಷೆ ಮುಗಿದ ಸಂಭ್ರಮದಲ್ಲಿ ಬೇಗ ನಿದ್ರಿಸಬೇಕೆಂದು ಮಲಗಿದರೆ ನಿದ್ರೆಯೇ ಬರುತ್ತಿಲ್ಲ.

. ಹದಿನೈದು ದಿನಗಳಿಂದ ಪರೀಕ್ಷೆಗೆ ತಡರಾತ್ರಿಯವರೆಗೆ ಕೂತು, ಬೆಳಿಗ್ಗೆ ಬೇಗ ಏಳುವುದೆಂದರೆ ಕಬ್ಬಿಣದ ಕಡಲೆಯಂತಾಗುತ್ತಿತ್ತು.. ಓದುತ್ತಾ ಓದುತ್ತಾ ನಿದ್ರಾದೇವಿಯು ಸೆಳೆದು ಕೊಳ್ಳುತ್ತಿತ್ತು..ಬೆಳಿಗ್ಗೆಯಂತೂ ಬಿಡಿ..ಪುಸ್ತಕ ನೋಡಿದರೆ ಸಾಕು ಕಣ್ಣುಗಳು ತನ್ನಿಂದ ತಾನೇ ಮುಚ್ಚುತ್ತಿತ್ತು..ಅಮ್ಮನ ಹತ್ತಿರ ಪ್ರತೀ ದಿನ ಬೆಳಿಗ್ಗೆ ಫೋನ್ ಮಾಡಿ ಸ್ವಲ್ಪ ಮಾತಾಡಿ ಎಬ್ಬಿಸು ಆಗ ಸರಿಯಾಗಿ ಎಚ್ಚರವಾಗುತ್ತೆ ಎಂದರೆ ಎರಡು ದಿನ ಮಾತ್ರರ..ಮೂರನೇಯ ದಿನದಿಂದ ಬೆಳಿಗ್ಗೆ ಫೋನ್ ರಿಂಗ್ ಆದ್ರೆ ಸಾಕು ಸ್ವಿಚ್ ಆಫ್ ಮಾಡಿ ಮತ್ತೆ ಮಲಗುವುದು.. ಅಲಾರಾಂ ಅಂತೂ ಎಷ್ಟು ಶಾಪವನ್ನು ತೆಗೆದುಕೊಂಡಿದೆಯೋ ಗೊತ್ತಿಲ್ಲ..  ನಾವು ಮೂವರೂ ಅಲಾರಾಂ ಇಟ್ಕೊಂಡು ಮಲಗ್ತಿದ್ವಿ.. ಮಲಗಿ ಸ್ವಲ್ಪ ಹೊತ್ತು ಆಯಿತೇನೋ ಎಂದಾಗ ಒಬ್ಬೊಬ್ಬರ ಅಲಾರಾಂ ಒಂದೊಂದು ತರಹ ಕೂಗಲು ಶುರು ಮಾಡ್ತಿತ್ತು..ಬಾಯಿಗೆ ಬಂದ ಎಷ್ಟೋ ಕವನಗಳು ಪರೀಕ್ಷೆಯ ದೃಷ್ಟಿಯಿಂದ ಮರೆಯಾಗುವಂತೆ ಮಾಡುತ್ತಿದ್ದೆ..

                  ಇನ್ನು ನನ್ನ ಒಬ್ಬಳು ರೂಂ ಮೇಟ್ ಪುಸ್ತಕ ಹಿಡಿದುಕೊಂಡೇ ಮಲಗುತ್ತಿದ್ದಳಾದರೂ, ಏ ನಿದ್ರೆ ಮಾಡ್ಬೇಡ  ಹೇಳಿದಾಕ್ಷಣ ನಾ ಓದ್ತಾ ಇದೀನಿ ನಿದ್ರೆ ಮಾಡಿಯೇ ಇಲ್ಲ ಎಂದು ಸಾಧಿಸುತ್ತಿದ್ದಳು. .ನಾನು ರಾತ್ರಿ ಬೇಗ ಮಲಗಿ ಬೇಗ ಏಳಬೇಕೆಂದುಕೊಂಡರೆ ಬೇಗ ಏನೋ ಮಲಗುತ್ತಿದ್ದೆನಾದರೂ ಏಳುವುದು ಸ್ವಲ್ಪ ಲೇಟಾಗಿಯೇ ಆಗುತ್ತಿತ್ತು.

   ಸ್ಟಡೀ ಹಾಲೀಡೇಸ್ ಲಿ ಕನಸುಗಳೂ ಬೀಳೋದು ಜಾಸ್ತಿ.. ಎದ್ದ ತಕ್ಷಣ  ಇವತ್ತು ನನ್ನ ಕನಸಿನಲ್ಲಿ ನೀನು ಬಂದಿದ್ದೆ ಎಂದು ಹೇಳುವುದರೊಳಗೇ ಬೆಳಕಾಗುತ್ತಿದ್ದವು.. ಪ್ರತೀ ದಿನವೂ ಒಬ್ಬರಿಗಲ್ಲ ಒಬ್ಬರಿಗೆ ಕನಸು..ಪರೀಕ್ಷೆಯಲ್ಲಿ ಡಿಬಾರ್ ಆದಂತೆ ಒಂದು ಕನಸು ಬಿದ್ರೆ, ಹಾಲ್ ಟಿಕೇಟ್ ಕಾಣೆಯಾದಂತೆ ಇನ್ನೊಂದು ಕನಸು..ಇನ್ನು ಫೇಸ್ಬುಕ್, ಬ್ಲಾಗ್ ಇಂದ ಸ್ವಲ್ಪ ದೂರವಿರೋಣ ಎಂದರೆ ಹಾಳೆಯಲ್ಲಿ ಬರೆದಿಟ್ಟ ಕವನವು ಬಾ ಎಂದು ಕರೆಯುತ್ತಿತ್ತು..

ಪರೀಕ್ಷೆ ಶುರುವಾಗಿ ಎಷ್ಟೊಂದು ದಿನ ಆಗಿತ್ತು ಅಬ್ಬ ಮುಗೀತಲ್ಲ..ಎಂದು ಖುಷಿ ಖುಷಿಯಲ್ಲಿದ್ದರೂ ನಾಳೆಯಿಂದ ಪರೀಕ್ಷೆಯನ್ನು ತುಂಬಾ ಮಿಸ್ ಮಾಡ್ಕೊಳ್ತೀವಿ ಎಂದೆಲ್ಲ ಅನಿಸಲು ಶುರುವಾಗಿತ್ತು.. ಲಾಸ್ಟ್ ಎಕ್ಸಾಂ  ಸೈಕಾಲಜಿ ಆಗಿದ್ದರಿಂದ ಬೇಗ ಬರೆದು ಪೇಪರ್ ಕೊಟ್ಟು ಬಂದರೆ ಸಾಕು ಎನ್ನುವಂತಾಗಿತ್ತು..

ನಿನ್ನೆ  ಮನವೆಲ್ಲಾ ಊರಿನ ಕಡೆಗೆ ಹೋಗುವ ದಿನವನ್ನು, ಅಣ್ಣನ ಮಗನನ್ನು ಎತ್ತಿ ಲಾಲಿ ಹಾಡುವ ಸಮಯವನ್ನು , ಅಮ್ಮನನ್ನು ನೋಡಿ ತಬ್ಬಿಕೊಳ್ಳುವ ಆಸೆಯನ್ನು  , ಅತ್ತಿಗೆ ಹತ್ತಿರ ಕಾಲೇಜಿನ ಸುದ್ದಿಗಳನ್ನೆಲ್ಲಾ ಹೇಳುವ ತವಕವನ್ನು, ಅಣ್ಣ ಹತ್ತಿರ, ಅಪ್ಪನ ಹತ್ತಿರ ಹೇಳುವ ಜೋಕುಗಳನ್ನು ಲೆಕ್ಕ ಹಾಕುತ್ತಿದ್ದ ನನಗೆ ಪರೀಕ್ಷೆ ಮುಗಿದರೂ ರಾತ್ರಿ ನಿದ್ರೆಯೇ ಬರಲಿಲ್ಲ...ಪರೀಕ್ಷೆಯ ದಿನ ಬೇಡವೆಂದರೂ ಬರುತ್ತಿದ್ದ ನಿದ್ರೆಯು ಈಗ ಎಲ್ಲಿ ಸರಿದು ಹೋಯಿತೋ..?

Monday, September 17, 2012

ಹಬ್ಬಕ್ಕೂ ಊರಿಗೂ.....

ಹಬ್ಬವೆಂದರೇ ಹಾಗೇ ಪ್ರತೀ ಹಬ್ಬಕ್ಕೂ ಊರಲ್ಲಿರಬೇಕೆನ್ನುವ ಆಸೆ....

ಇನ್ನೂ ತಿಂಗಳು ಇರುವಾಗಲೇ ಕ್ಯಾಲೆಂಡರ್ ತಿರುವಿ ಹಾಕಿ 

ದಿನ ಎಣಿಸಲು ಶುರು ಮಾಡಲಾರಂಭಿಸುವುದು...

ಈ ಹಾಸ್ಟೇಲಿನ ಟೈಂ ಟು ಟೈಂ ದಿನಚರಿಗಳು, ಒಂದಷ್ಟು ಸ್ಟ್ರಿಕ್ಟ್ ನೆಸ್ 

ಸಾಕಾಗಿಹೋಗಿರುತ್ತದೆ..ಅತೀ ಭಾವದ ಮನಸು ಊರನ್ನು ನೋಡುವ 

ಕನಸಿನಲಿ ಮುಳುಗಿ ಹೋಗಿರುತ್ತೆ..ಅಮ್ಮನ ಹತ್ತಿರ ಹೇಳುವ ಸುದ್ದಿಗಳು 

ಒಂದಷ್ಟು ಪೆಂಡಿಂಗ್ ನಲ್ಲಿರುತ್ತೆ..ದಿನಾ ಕಾಲೇಜು ಹಾಸ್ಟೇಲು ಎಂದು 

ಇರುವವರಿಗೆ ಊರಿಗೆ ಹೋಗುವುದು ಅದರಲ್ಲೂ ಹಬ್ಬಕ್ಕೆ ಹೋಗುವುದೆಂದರೆ 

ಎಲ್ಲಿಲ್ಲದ ಸಂಭ್ರಮ..ಆದರೆ ಈ ಹಬ್ಬಕ್ಕೆ ಪರೀಕ್ಷೆಗೆ ಅದೇನು ನಂಟೋ 

ತಿಳಿಯದು..ಜ್ಯೋತಿಷ್ಯಿಗಳ ಹತ್ತಿರ ದಿನ ನೋಡಿ ಇಟ್ಟಂತೆ ಪ್ರತೀ ಭಾರಿಯೂ 

ಹಬ್ಬಕ್ಕೆ ಹೋಗುವ ಕನಸಿಗೆ ಈ ಪರೀಕ್ಷೆಯು ಅಡೆತಡೆ..ಒಂದಷ್ಟು ಬೈಗುಳ 

ರೇಗಾಟ ಎಲ್ಲವೂ ಇದ್ದರೂ ಏನೂ ಮಾಡಲಾಗದ ಮಾತು.. ಈ ಪರೀಕ್ಷೆ ಕಂಡು

 ಹಿಡಿದ ಮಹಾತ್ಮರು ಯಾರಪ್ಪಾ ಎಂದು ಅನಿಸುವುದುಂಟು.. ಮನಸ್ಸೆಲ್ಲವೂ

 ಊರಲ್ಲಿಯೇ ಇರುತ್ತೆ.. ಯಾವಾಗಲೂ ಅಷ್ಟೆ ..ಅಂದುಕೊಂಡಿದ್ದೆಲ್ಲಾ 

ಆಗಬೇಕಲ್ಲ.. ಹಬ್ಬಕ್ಕೆ ಮನೆಯವರೆಲ್ಲಾ ಸೇರುತ್ತೇವಲ್ಲಾ ಎನ್ನುವ ಖುಷಿ 

ಒಂದೆಡೆಯಾದರೆ , ದೂರದ ಊರಿನಲ್ಲಿ ನೌಕರಿ ಮಾಡುತ್ತಿರುವ 

ಕುಟುಂದವರೆಲ್ಲರೂ ಸಿಗುತ್ತಾರೆಂಬ ಖುಷಿ..ಈ ಖುಷಿಯೆಲ್ಲವೂ ಏನೇ ಇದ್ದರೂ 

ಊರಿಗೆ ಹೋಗುವುದಾದರೆ ಮಾತ್ರ..ಬಸ್, ಟ್ರೇನ್ ಎಲ್ಲವೂ ಎಷ್ಟೇ ರಶ್ 

ಇದ್ದರೂ ಹೋಗಿಯೇಬಿಡಬೇಕೆನ್ನುವ ಹಠ...

ಅದೇನೇ ಇರಲಿ ಈ ಬಾರಿ ಅಧಿಕಮಾಸ ಬಂದಿದ್ದರಿಂದ 

ಪ್ರತೀ ಬಾರಿಯ ಹಬ್ಬದ ದಿನಗಳಿಗಿಂತ ಮುಂದೆ ಇರುವುದರಿಂದ  

ಪರೀಕ್ಷೆಯಿಂದ ಹಬ್ಬ ತಪ್ಪಿಸಿಕೊಂಡಿತು..ಈ ಬಾರಿಯ ಹಬ್ಬಕ್ಕೆ ಊರಲ್ಲಿಯೇ 

ಇರುವುದೇ ಖುಷಿ..

Tuesday, August 14, 2012

ಭಾವನೆ

ನನ್ನ ಉಸಿರನಲೂ ನಿನ್ನ ಭಾವನೆಗಳೇ  ಹರಿಯುತ್ತ
ನಾನು  ಬದುಕುವ ಉಸಿರೇ ನೀನಲ್ಲವೇ
ಭಾವಜೀವಿ ನಾನಾದರೆ ಅದರ ಭಾವನೆ ನಿನ್ನದಲ್ಲವೇ
ಭಾವನೆಗೆ ರೂಪ ಬೇಕೆ, ಬಣ್ಣ ಬೇಕೆ?
ನಮ್ಮಿಬ್ಬರಲೂ  ಅರ್ಥ ಮಾಡಿಕೊಳ್ಳುವ ಮನಸ್ಸೊಂದಿದ್ದರೆ
ನಿನ್ನ ಹೃದಯದಲಿ ಎಂದೂ 
ಗುನುಗುನಿಸುವ ಹಾಡು ನನ್ನದೇ
ನನ್ನ ಮನವು ಯೋಚಿಸುವ ಪ್ರತೀ ಕ್ಷಣವೂ ನೀನೇ
ನನ್ನ ಬಗೆಗಿನ  ನಿನ್ನ ಭಾವನೆಯಲ್ಲಿಯೇ ಬದುಕು ಕಟ್ಟುವವಳು
 ನಾನುಕಂಡ ಕನಸುಗಳೆಷ್ಟೋ ,
 ನನಸಾಗುವುದೆಷ್ಟೋಯಾವುದೂ ತಿಳೀದಿ
ಲ್ಲನಿನ್ನ ಬಗೆಗಿರುವ ಭರವಸೆಯೊಂದೇ 
ನನ್ನ ಬದುಕಿಗೊಂದು ಸ್ಪೂರ್ತಿಯೆಂದರೆ







Saturday, August 11, 2012

ಮೂಡಿಸಿದೆ .........

ಮನದೊಳಗಿನ ಬೆಚ್ಚಗಿನ ಭಾವನೆಯೆಲ್ಲವೂ
ನಿನ್ನೊಲುಮೆಯಿಂದ ಸಿಹಿಯಾಗಿಸಿ
ನಿನ್ನೊಳಗಿನ ನನ್ನೀ ಬದುಕ ಕಾವ್ಯವು
ಮೂಡಿಸಿದೆ ಎಂದಿಗೂ ಬೆಳದಿಂಗಳಂತಹ
ಬೆಳಕಿನ ಪ್ರೀತಿಯ,
 ಬದುಕಿನಲ್ಲಿ ಎಂದಿಗೂ ಕಪ್ಪು ಅಮಾವಾಸ್ಯೆಯು
ಸುಳಿಯಲಾರದೆಂಬ ಭರವಸೆಯ ಯೋಚನೆ,
ನಮ್ಮೊಳಗೆ ಅರ್ಥಮಾಡಿಕೊಂಡು ಬಾಳುವ ಬಾಳಿಗೆ
 ಬಂಧದ ಬೆಸುಗೆಯು ಗಟ್ಟಿಯಾಗಿಸಿದೆ ,
 ಜೊತೆ ಮಾತನಾಡಬೇಕೆಂದಿದ್ದ
 ಮಾತೆಲ್ಲವೂ
ಮಾತನಾಡಿಸಿದೆ ಅಸಾಧ್ಯ ಮೌನವ
ಸಾವಿರ ಪದಗಳಲ್ಲೂ ತಿಳಿಸಲಾಗದ ಅವರ್ಣನೀಯ ಪ್ರೀತಿಯು
ಮಾತಿನಿಂದ ಮೂಕವಾಗಿ ಮನಸಿನೊಂದಿಗೆ ಕಣ್ಣಿನಲ್ಲಿಯೇ
ಅರ್ಥೈಸಿಬಿಟ್ಟಿದೆ

Tuesday, July 10, 2012

ಬಾಂಧವ್ಯದ ಸೃಷ್ಟಿ

ಬದುಕಬೇಕು ಜೊತೆಗೆ
ಉಸಿರು ಇರುವ ವರೆಗೆ
ಆ ಉಸಿರೇ ನಮ್ಮಿಬ್ಬರ ಪ್ರೀತಿಯಾಗಿ
ಕೊನೆಯ ತನಕವೂ ಬೆಸೆದಿರಬೇಕು
ಸುಮಧುರ ಬಾಂಧವ್ಯವ
ಕಾಯುವ ಪ್ರತೀ ಘಳಿಗೆಯಲ್ಲೂ 
ಇಬ್ಬರ ನಗುವಿರಬೇಕು
ಬದುಕಬೇಕು ಕಣ್ಣಲ್ಲಿ ಕಣ್ಣಾಗಿ
ಮನದಲ್ಲಿ ಮನವಾಗಿ 
ನಂಬಿಕೆ ಭರವಸೆಯೆಲ್ಲವೂ
ಹರಿಯುತ್ತಿರಬೇಕು
ಪ್ರತೀ ಕ್ಷಣದಲ್ಲೂ
ನನ್ನ ಭಾವನೆಯ ಜಗತ್ತು
ನೀನೆಂದೂ ಆಗಿ
ನಿನ್ನ ಭಾವನೆಯ ಜಗತ್ತು
 ನಾನೆಂದು ಆಗಿ
ಎಂದೆಂದು ಇರಬೇಕು ಜೊತೆಜೊತೆಯಲಿ
ನಲುಮೆಯ ಜಗದ ಒಡೆಯ
ಎಂದೂ ನೀನಾಗಿರಬೇಕು
ನಿನ್ನ ಹೃದಯದಲಿ ನನ್ನ ಪ್ರೀತಿಯ ಸೃಷ್ಟಿ
ನನ್ನ ಹೃದಯದಲಿ ನಿನ್ನ ಪ್ರೀತಿಯ ಸೃಷ್ಟಿ
ಎರಡು ಹೃದಯ ಬಡಿತವು ಒಂದು
ಕೈ ಹಿಡಿದು ಸಾಗಬೇಕು
ಕೊನೆಯತನಕವೂ ಎಂದೆಂದು













Sunday, July 08, 2012

ಬಣ್ಣದ ಆಸೆಯೇ...


ಆಕೆಗೆ ಎಲ್ಲರಂತೆ ಬದುಕುವ ಆಸೆ
ಕೆಲವರೆಲ್ಲಾ  ಖುಷಿಯಿಂದ
ನಗುನಗುತ ಮದರಂಗಿ ಹಾಕಿಸಿಕೊಳ್ಳುತ್ತಿದ್ದರೆ,
ಕೇಳುವಳು ಅಮ್ಮನ ಬಳಿಗೆ ನನಗೂ ಆ ಬಣ್ಣವ ಕೊಡಿಸೆಂದು,
ಹೇಗೆ ಕೊಡಿಸಲಿ ನಾ
ಬದುಕಿಗೆ ಬಣ್ಣ ಕೊಡಲಾಗದಿದ್ದ ಮೇಲೆ
ಎಲ್ಲಿ ಬರಬೇಕು
ಆ ಮದರಂಗಿ ಚಿತ್ತಾರಗಳು
ಬಡವರ ಪಾಲಿನ ಮದರಂಗಿಯೆಂದರೆ
ಬಣ್ಣದ ಎಲೆಯಿಂದ ಬಿಡಿಸಲೇ?
ಎಂಬ ಅಮ್ಮನ  ಉತ್ತರಕೆ
ಹಾರಿ ಹೋಗಿತ್ತು  ಅವಳ ಮದರಂಗಿಯ ಕನಸುಗಳು
ಹಣೆಯ ಬರಹವೆಂಬ ಈ ಪಟ್ಟಕ್ಕೆ
ಚಿತ್ತಾರದ ಆಸೆಗಳೆಲ್ಲವೂ
ಕೇವಲ ಕನಸುಗಳಷ್ಟೇ
ಆಟಿಕೆಯ ಸಾಮಾನು, ರೆಕ್ಕೆ ಪುಕ್ಕವಿರುವ
ಬಣ್ಣದ ಅಂಗಿಗಳನ್ನು,
ಅವಳಿಗೂ ಕೊಳ್ಳುವ ಬಯಕೆ
ಜಾತ್ರೆಯ ತೊಟ್ಟಿಲಿನಲ್ಲಿ ಆಡುವ ಆಸೆ
ಟಿ.ವಿ ಯಲ್ಲಿ ಕಾರ್ಟೂನ್ ನೋಡುವ ಆಸೆ
ಎಲ್ಲವನ್ನೂ ಕಿತ್ತುಕೊಂಡಿತೇ
ಈ ಬಡತನ
ಆ ಮುಗ್ಧ ಹುಡುಗಿಯ
ಕನಸೆಂದು ನನಸಾಗುವುದೋ.......






 

Saturday, July 07, 2012

ನೀನೇ...


ಆ ನಿನ್ನ ಒಲವು
ಬಂದಿಹುದು ಸಿಹಿ ಸ್ವಪ್ನದಲು,
ಸಿಹಿ ಜೇನಿಗಿಂತಲೂ ಸಿಹಿಯಾದ
ನಿನ್ನ ಕಾಳಜಿಯ ಪರಿಯ
ಹೇಗೆ ವರ್ಣಿಸಲಿ
ಪ್ರೀತಿಯ ಆಗಸದಿ
ಹೊಳೆಯು ನಕ್ಷತ್ರ ನೀನು
ಹುಣ್ಣಿಮೆಯ ಬೆಳದಿಂಗಳ
   ಹೊಳಪು
ಮನದ ಮಲ್ಲಿಗೆಯ ಸುವಾಸನೆ  ನೀ
ಪ್ರತೀ ಕ್ಷಣವೂ ನನ್ನ ಹೃದಯದಲಿ ಕೇಳುವ
ನಾದ ನೀನೇ
ಬೆಳಗಿ ಜಾವದ ಬೆಳಕು ನೀನು
ಇದೆಲ್ಲವೂ ನೀನೇ? ಎಂಬ ಪ್ರಶ್ನೆಗೆ  ನನ್ನ ಉತ್ತರ
ನೀನು ನೀನಲ್ಲ,
ನಾನು ನೀನಾಗಿ , ನೀನು ನಾನಾಗಿ
ನಮ್ಮದೇ ಒಲವಿನ ಲೋಕ
ಬಾಳ ನಾವಿಕ
ಬದುಕಬೇಕು ನಾವು
ಎಂದೂ ಬಾಡದ ಹೂವಾಗಿ..









Tuesday, July 03, 2012

ಕನಸುಗಳೇ...

ಕನಸು ಕಾಣುವ ಹುಡುಗಿ ನಾ
ಬಣ್ಣದ ಕನಸುಗಳು
ಮನದ ಕಡಲಿನಲಿ ಅಲೆಯಂತೆ
ತಂಗಾಳಿಯ ಆ ಸವಿಯಂತೆ
 ಕನಸುಗಳ ಹುಟ್ಟಿಗೆ ಸಮಯವೇ ಇಲ್ಲ
ಯೋಚಿಸ ಹೊರಟರೆ ಕನಸು ಮುಗಿಯುವುದೆಂದೋ
ಮುಖದಲ್ಲೊಂದು ಸಣ್ಣಗೆ ನಗು ತರಿಸುವ ಕನಸುಗಳು
ಮಾತನಾಡುತ್ತ ಎಂದೂ ಕುಳ್ಳುವ ಕನಸು
ಎಲ್ಲೆ ಉಂಟೇ ಈ ಹುಚ್ಚು ಕನಸಿಗೆ
ಅಂದುಕೊಂಡ ಕನಸೆಲ್ಲವೂ 
ನನಸಾಗಬಹುದೇ?
ಆಗಬಹುದು ಛಲವೊಂದಿದ್ದರೆ
ಭವಿಷ್ಯದ ಬಗೆಗಿನ ಕನಸು
ಅಪ್ಪ ಅಮ್ಮನ ಆಸೆಯ ನನಸು ಮಾಡುವ ಕನಸು
ಮುಗ್ಧ ಹೃದಯದಲಿ ಎಂದೂ ಮಾಸದಿರುವ ಕನಸು
ನೂರು ವರುಷವು ಬಾಳುವ ಕನಸು
ಹೇಳ ಹೊರಟರೆ ಈ ಕನಸನ್ನು
ಮುಗಿಯುವುದಿಲ್ಲ ನನ್ನ ಈ ಕನಸೆಂಬ ಹಠಮಾರಿ






Saturday, June 30, 2012

ಆ ಮುಂಜಾವು

ವಸಂತ ಕಾಲದಿ
ಮೂಡಣ ತೆರದಿ
ಹಕ್ಕಿಗಳ ಇಂಚರವು
ಸೃಷ್ಟಿಸಿತ್ತು ಸುಮಧುರ
ಲೋಕವ
ಹೊಂಬೆಳಕಿನ ತುಸು ಮುಂಜಾವಿನ
ಇಬ್ಬನಿಯ ನೋಡಿ
ಸಂಭ್ರಮಿಸಿತ್ತು ಈ
 ನನ್ನ ಕಂಗಳು
ಹಸಿರ ಚಿಗುರಿನಲ್ಲಿ
 ಕನಸು  ಮೂಡಿ
ತುಟಿಯಂಚಿನಲಿ ಸಣ್ಣ ನಗುವು..
ಮನಸು ಕನಸಿನ ಮಾತಿಗೆ
ಆ ಬೆಳ್ ಮುಂಜಾವು ಸಾಕ್ಷಿಯಾಗಿ
ಆಲೋಚಿಸಿತ್ತು ಬದುಕಿನ ಬಗೆಗೆ
ಪೃಕೃತಿಯ ರಮಣೀಯ ದೃಶ್ಯವು
ತೋರಿಸಿತ್ತು
ಸಾಗುವ ದಾರಿಯನ್ನು..








Wednesday, June 27, 2012

ಸಾಗಬೇಕು ಬಹುದೂರ...

ದಿನಗಳು ಉರುಳುತ್ತಿವೆ
ಯಾರಿಗೂ ಕಾಯದಂತೆ,
ವೇಗವಾಗಿ ಸಾಗುತಿದೆ
ಬದುಕೆಂಬ ಗಾಡಿಯು
ನನ್ನ ಪಾಲಿನ
ಕಷ್ಟ ಸುಖಗಳು, ಅನುಭವಗಳೆಲ್ಲವೂ
ಕೇವಲ ಚಿಗುರುಗಳಷ್ಟೇ,

ಸಾಗಬೇಕಿದೆ ಇನ್ನು ಬಹುದೂರ
ಕಳೆದಿರುವ ದಿನಗಳಿಗಿಂತ ಕಳೆಯಲಿರುವ
ದಿನಗಳೇ ಹೆಚ್ಚಾದಾಗ
ಬೇಕಲ್ಲವೇ ಬದುಕಿನುದ್ದಕ್ಕೂ
ಸಾಧನೆಯ ಹೆಜ್ಜೆಗಳು
ಕಂಡ ಸಿಹಿ ಸ್ವಪ್ನಗಳಲಿ
ನನಸೆಂಬ ನಂಟಿಗೆ
ಬೇಕಾಗಿದೆ ಚಿಂತನೆಯ ಬದುಕು
ಮೌಢ್ಯತೆಗಳೆಲ್ಲ ಮೋಡದಲಿ
ಮುಸುಕಿ ಹೋಗಬೇಕಾಗಿದೆ
ಗುರಿಯೆಡೆಗೆ ಮುಖ ಮಾಡಿ
ಬದುಕಿನ ಕನಸುಗಳಿಗೆ
ಭಾವನೆ ತುಂಬಿ
ಆಗಬೇಕಿದೆ ಬದುಕೆಂಬುದು
ನನ್ನ ಪಾಲಿಗೊಂದು ಭಾವಗೀತೆ

                                                                                                                                                                                     

Sunday, June 24, 2012

ಮನವೇ ನಿನ್ನ

ನೋಟದಲಿ ನೋಡುತಿರೆ
ಹೃದಯದಲಿ ಇಂದು
ಭಾವಲೋಕದ ಸೃಷ್ಟಿಯ ಲಹರಿ
ಅರಳಿತು ಭಾವನೆ ಅರಿವಿಲ್ಲದೆ
ಬಯಸುವ ಏಕಾಂತಕೆ
ಸಂಗೀತದ  ಮಳೆಯ ಹನಿ
ಎಲ್ಲವೂ ಶೂನ್ಯವಾಯಿತು
ಮನವೇ ನಿನ್ನ ಮಾತೊಂದೇ
ನನ್ನ ಬದುಕಾಯಿತು
ಸುಳಿವಿಲ್ಲದೆ ಹೊರಟ ಮಾತೆಲ್ಲವೂ
ಮರಳಿ ಜೊತೆಯಾಯಿತು
ಚಿತ್ತಾರ ಲೋಕವೆಲ್ಲ ಗಂಭೀರದೆಡೆಗೆ
ಮುಖಮಾಡಿತು
ಬದುಕು ಹೆಣೆಯುವ ಕೆಲಸ
ಮಾಡೆಂದು ನನ್ನ ಮನವಿಂದು ಹೇಳಿತು









Wednesday, June 13, 2012

ನನ್ನ ಪ್ರೀತಿಯ ಛತ್ರಿ/ಕೊಡೆ

ಯಾಕೋ ನನ್ನ ಛತ್ರಿ ದಿನದಿಂದ ದಿನಕ್ಕೆ ಕಡ್ಡಿಯನ್ನು ಮುರಿದುಕೊಳ್ಳುತೊಡಗಿತ್ತು .
ಅದು ನನ್ನ ಪ್ರೀತಿಯ ಛತ್ರಿಯಾಗಿತ್ತು.ಮೂರು ವರುಷಗಳ ಹಿಂದೆ ಅಪ್ಪನ ಜೊತೆಗೆ
ಪೇಟೆಗೆ ಹೋದಾಗ ಬಿಳಿಯ ಬಣ್ಣದ ಪರದೆಯ ಮೇಲೆ ಕೆಂಪು ಪಾತರಗಿತ್ತಿ ಇದ್ದ ಚಿತ್ರ ನೋಡಿದೆ
.ಅದನ್ನು ಬಿಡಿಸಿದಾಗ ಪಾತರಗಿತ್ತಿ ಹಾರಿದಂತೆ ಭಾಸವಾಗುತ್ತಿತ್ತು.ಆ ಛತ್ರಿಗೂ ನನಗೂ ಯಾವ ಜನುಮದ
ಅನುಬಂಧವಿತ್ತೋ ಏನೋ..ಆ ಛತ್ರಿಯೇ ಬೇಕೆನಿಸಿ ಅದು ಚೆನ್ನಾಗಿಲ್ಲವೆಂದು ಅಪ್ಪ ಹೇಳಿದರೂ ಹಠ ಮಾಡಿ ತೆಗೆದುಕೊಂಡಿದ್ದೆ.ನಾನು ಎಲ್ಲೇ ಹೋದರೂ ಆ ಛತ್ರಿ ನನ್ನ ಜೊತೆಗೇ ಇರುತ್ತಿತ್ತು.ಮನೆಯವರಿಗ್ಯಾರಿಗೂ
ಆ ಛತ್ರಿಯನ್ನು ಒಯ್ಯಲು ಬಿಡುತ್ತಿರಲಿಲ್ಲ.ಅವರೇನಾದರೂ ಅದನ್ನು ಮುರಿದುಕೊಂಡು ಬಂದರೆ,
ಅಥವಾ ಕಾಣೆ ಮಾಡಿಕೊಂಡು ಬಂದರೆ ಎನ್ನುವ ಮಟ್ಟಿಗೆ ಆ ಛತ್ರಿಯ ಬಗೆಗಿನ ಪ್ರೀತಿ ನನ್ನದಾಗಿತ್ತು.
ನನ್ನ ಗೆಳತಿಯಾಗಿಬಿಟ್ಟಿತ್ತು ಅದು.ಮಳೆಗಾಲದ ನನ್ನ ಕನಸುಗಳು, ಭಾವನೆಗಳು ಆ ಛತ್ರಿಗೂ ಗೊತ್ತಿತ್ತು.ಆ ಛತ್ರಿಗೆ ದಕ್ಕೆಯಾಗದಿರಲೆಂದು ಅದೆಷ್ಟು ಬಿರುಗಾಳಿಯಲ್ಲಿ ನಾನೇ ತೋಯ್ದುಕೊಂಡು ಹೋಗಿದ್ದೇನೆ. ನನ್ನ ಗೆಳತಿಯರೆಲ್ಲಾ ಮಳೆಯಲ್ಲಿ ತೊಯ್ಯದಂತೆ ರಕ್ಷಿಸಿದ ನನ್ನ ಛತ್ರಿಯು ಇಂದೇಕೋ ಹಾಳಾಗುತ್ತಿದೆ.
ಛತ್ರಿ ರಿಪೇರಿ ಮಾಡುವವನ ಹತ್ತಿರ ಹೋಗಿ ರಿಪೇರಿ ಮಾಡು ಎಂದರೆ ಎಷ್ಟು ಸಿಂಪಲ್ಲಾಗಿ ಹೇಳ್ಬಿಡ್ತಾನೆ.
.ಬೇರೆ ಛತ್ರಿ ತೊಗೊಳ್ರಿ ಎಂದು...ದೂರದ ಊರಲ್ಲಿ ಮನೆಯವರು ನೆನಪಾದಾಗ ಜಾರುತ್ತಿದ್ದ ಕಣ್ಣೀರಿಗೆ
 ಛತ್ರಿ ಅಂಚಿನಲ್ಲಿ ಹರಿಯುವ ಮಳೆಯ ಹನಿಯು  ಸಾಥ್ ನೀಡುತ್ತ ನನಗೆ ಸಮಾಧಾನಿಸುತ್ತಿತ್ತು..ಆ ಛತ್ರಿ
ಇದ್ದುದ್ದರಿಂದ ಮಳೆಗಾಲವೆಂದೂ ಬೋರ್ ಅನಿಸಲೇ ಇಲ್ಲ..ಈ ಛತ್ರಿಯ ಕಡ್ಡಿಗಳು ಮುರಿದು ಹೋಗಿವೆಯಾದರೂ,
ಹೊಸ ಛತ್ರಿ ತೆಗೆದುಕೊಂಡರೂ ಈ ಛತ್ರಿಯನ್ನೇಕೋ ಕೈ ಬಿಡಲು ಏಕೋ ಮನಸ್ಸಾಗುತ್ತಿಲ್ಲ...ಎಷ್ಟೆಂದರೂ ನನ್ನ ಭಾವನೆಗಳು ಸೇರಿಲ್ಲವೇ ಆ ನನ್ನ ಪ್ರೀತಿ ಛತ್ರಿಯಲ್ಲಿ...

ಅರ್ಥವಾಯಿತೇ....

ಕಣ್ಣೀರೇ ಜೊತೆಯಾಯಿತೇ
ಆ ಒಬ್ಬಂಟಿ ಜೀವಕೆ
ಬಣ್ಣ ಬಣ್ಣದ ಕನಸುಗಳಿಗೀಗ
ಕಪ್ಪು ಬಣ್ಣವೊಂದೇ ಕಾಣುತಿದೆ
ನೋವು ಮುಸುಕಿದ ಛಾಯೆಗೆ 
ಎಲ್ಲವೂ ಬರಿದಾಗಿದೆ
ಆ ಮುಗ್ಧ  ಹೃದಯದ ಮುಗ್ಧ ಪ್ರಶ್ನೆಗಳೆಲ್ಲವೂ
ಉತ್ತರ ಸಿಗದೇ ತಡಕಾಡಿದೆ
ತವಕದಿಂದ ಮಾತನಾಡಬೇಕೆಂಬ ಹಂಬಲಕ್ಕೆ
ಪರಿಹಾರವೆಂದಿಲ್ಲ
ಪ್ರೀತಿ ಕಡಿಮೆಯಾಯಿತೆಂಬ ಉತ್ತರಕ್ಕೆ
ತಿಳಿಯಬಹುದು ಆ ಒಲವು ಕಳೆದು ಹೋದ ಮೇಲೆ
ಅರ್ಥವಾಗಬಹುದೇ ಪ್ರೀತಿ ಎಂದಾದರೂ....




Wednesday, May 02, 2012

ನೀ ನನ್ನ ಜಗತ್ತು

ನನ್ನ ಕಣ್ಣಲ್ಲಿ ನಿನ್ನ ಬಿಂಬವು
ನಿನ್ನ ಕಣ್ಣಲ್ಲಿ ನನ್ನ ಬಿಂಬವು
ಸೇರಿ ಸೃಷ್ಟಿಸಿದೆ
ಪ್ರೀತಿಯ ಜಗತ್ತನ್ನೊಂದು
ಹೃದಯ ಬಡಿತವು ಹೇಳುತ್ತಿದೆ ನಿನ್ನ ಹೆಸರ
ಹೆಸರಿಲ್ಲದ ಪ್ರೀತಿ ನೀನೆಂದು
ಮನವು ಮಾತನಾಡುತ್ತಿದೆ ಕಿವಿಗೆ ಕೇಳಿಸದಂತೆ
ನಿನ್ನ ಮನವೊಂದೇ  ಕೇಳುವಂತೆ
ನೀನಿದ್ದ  ನನ್ನ ಜಗತ್ತೇ ಸುಂದರವೆಂದು,
ಆಕಾಶದಂತೆ ತಿಳಿಯಾಗಿಸಿದೆ
ಪರಿಶುದ್ದ  ಪ್ರೀತಿಯ
 ನೀನೇ ನನ್ನ  ಜೀವನವೆಂದು
ಹೇಳಬಯಸುತ್ತದೆ ನನ್ನ ಮನವೆಂದೂ
ನೀ ನನ್ನ ಜೊತೆಗಿದ್ದರೆ ಬೇರೇ ಏನೂ ಬೇಡವೆಂದು....






Friday, March 30, 2012

ಜೊತೆಯಾಗಿರಲಿ






ಸುತ್ತ ನೀಲಿ ಆಕಾಶದಿ
ಮನಸುಗಳ ಸರಮಾಲೆಯಲಿ
ಜೊತೆಯಾಗಿಯೇ ಇರಲಿ
 ಭಾವನೆಯ ಲೋಕವಲ್ಲಿ
ಪ್ರೀತಿಯ ಗಂಧದ ಪರಿಮಳವೆಂದೂ ಮಾಸದಿರಲಿ
ಮೌನವೇ ಅರಿಯದ ನನ್ನೀ ಮನಕ್ಕೆ
ನಿನ್ನ ಮಾತೆಂದೂ ಗುನುಗುನಿಸುತಿರಲಿ
ಮಬ್ಬು ಬೆಳಕಿನಲ್ಲೂ  ನಿನ್ನ ಹೃದಯವು ಹೊಳೆದು
ತಾಜ್ ಮಹಲ್ ಗಿಂತಲೂ  ಸುಂದರ  ಬದುಕಾಗಲಿ
ಬಣ್ಣ ಬಣ್ಣದ ಕನಸುಗಳಿಗೆ ಸ್ಪಂದಿಸುವ ಹೃದಯವಾಗಿ
ಖುಷಿಯಾದ ಜೀವನವು ನನಸಾಗಲಿ
ನಿನ್ನ ಸಮಯವದು ಬೆಲೆಕಟ್ಟಲಾಗದ ಕ್ಷಣವೆಂದೂ ನನಗೆ,
ಆ ಸಮಯವೆಲ್ಲವೂ  ನನಗಾಗಿ , ಬದುಕಿಗಾಗಿ
ಎಂದೂ ಜೊತೆಯಾಗಿರಲಿ






Friday, March 16, 2012

ನಮ್ಮ ಮನೆಯ ಮುತ್ತು

ಹುಟ್ಟುವ ಮುಂಚೆಯೇ ಬೆಳೆದಿತ್ತು
ನಮ್ಮೆಲ್ಲರ ಪ್ರೀತಿಯು 
ನಮ್ಮ ಮನೆಯ ಪುಟ್ಟನ ಮೇಲೆ
ಅಂದಿನ ಮಧ್ಯಾಹ್ನ ನನಗೆಲ್ಲವೂ ಮರೆತು ಹೋಗಿತ್ತು
ಅವನು ಜನಿಸಿದನೆಂದು ಕೇಳಿದಾಗ
ಅಷ್ಟು  ಸಂಭ್ರಮದಿ ನಲಿದಿದೆ ನನ್ನೀ ಮನವು
ಅತ್ತೆ ಯಾದೆನೆಂಬ ಸಡಗರವು ನನ್ನ ಮುಖದಲ್ಲಿ ಹೊಳೆಯುತ್ತಿತ್ತು
ಎಲ್ಲರಲ್ಲಿಯೂ ನನ್ನ ಖುಷಿಯನ್ನು  ವರ್ಣಿಸಿ , ಹಂಚಿಕೊಂಡೆ
ನಮ್ಮ ಮನೆಯ ಮುತ್ತು ಅದು
ಆ ಕಂದನ ಮೇಲಿನ ಪ್ರೀತಿಯು ದಿನದಿನಕ್ಕೂ
ಹೆಚ್ಚುತ್ತಿದೆ..
ಅದೆಷ್ಟು ಖುಷಿಯಲ್ಲವೇ ಅಣ್ಣನ ಮಗನೆಂದು..
ಪದಗಳೇ ಸಾಕಾಗುತ್ತಿಲ್ಲ ಅದನ್ನು 
ವರ್ಣಿಸಲು





Wednesday, March 14, 2012

ಓ ಮನವೇ.......

ಎಲ್ಲೂ ನಿಲ್ಲದೇ ಸಾಗುತ್ತಿದೆ..
ಮನಸೆಂಬ ಹಠಮಾರಿ
ಗಾಳಿಯಾಚೆಗೆ ತೇಲುತ್ತಿದೆ
ಯಾರೀ ,ಮನಸಿನ ರೂವಾರಿ
ಇರುವುದೆಲ್ಲವ ಬಿಟ್ಟು ಹುಡುಕಿದೆ
ಏನನ್ನೋ
ಮಳೆಯಲೂ ಬಿಸಿಲಲೂ ಎನ್ನದೆ
 ಹೃದಯವ ತಟ್ಟಿ ಎಬ್ಬಿಸುತ್ತಿದೆ
ತೋಚದೆ ಮೌನಿಯಾದರೆ
ಬಂದು ಮಾತನಾಡಿಸುತ್ತದೆ.,.
ಎಷ್ಟೇ  ಒತ್ತಾಯಿಸಿದರೂ
ಕಟ್ಟಿ ಹಾಕಿಬಿಟ್ಟಿದ್ದೇನೆ ಮನಸ್ಸಾ
ಪ್ರೀತಿಗಿಂತ ಬದುಕು ದೊಡ್ಡದು
ಪ್ರೀತಿಗೇನು ಕೊರತೆಯೇ ನನಗೆ
ಅಪ್ಪ ಅಮ್ಮನ ಪ್ರೀತಿಯೆಲ್ಲವೂ ಇದೆಯೆಂದಾಗ
ನಾನೆಂದೂ ಮೋಸ ಮಾಡೆನು
ನನ್ನಮ್ಮ ಅಪ್ಪನಿಗೆ
ನನಗೇ ಗೊತ್ತು ಅವರೆಂದೂ ಬಯಸುವರು ನನ್ನ ಒಳಿತನ್ನೊಂದ
ನಾನೆಂದೂ ಅವರ ಮುದ್ದಿನ ಮಗಳು
ಅವರು ಹೇಳಿದ ಹಾಗೇ ಕೇಳಿದರೆ
ನನ್ನೀ ಬದುಕು ಬಂಗಾರವಾಗದೇ ಇದ್ದೀತೇ......
ಮೂರು ದಿನದ ಖುಷಿಗಿಂತ
ನೂರು ವರುಷದ ಬದುಕೇ ಮುಖ್ಯವಲ್ಲವೇ.....?









Wednesday, February 22, 2012

..¤Ã¤zÀÝgÉ
£ÀÀ£Àß ºÀÆ«£À PÀĸÀĪÀÄzÀ ¥ÀjªÀļÀ
UɼÉAiÀÄ
¨Ár ºÉÆÃzÀ VqÀªÀ aUÀÄj¸ÀĪÉAiÀiÁ
ºÀ¼ÉAiÀÄ £É£À¥ÀÄUÀ¼À°
ºÉƸÀ D¸ÉAiÀÄ aUÀÄj£À°
§gÀĪÉAiÀiÁ eÉÆvÉUÉ
PÉÆ£ÉvÀ£ÀPÀ
¸ÀÄAzÀgÀ UɼÉAiÀĤVAvÀ
fêÀ£À ¸ÀÄAzÀgÀ UÉƽ¸ÀĪÀ UɼÉAiÀÄ PÀ£À¸ÀÄ £ÀAzÀÄ
¤£Àß PÀtÂÚ£À° PÁtÄªÉ £Á CªÀÄÈvÀzÀ ©AzÀÄ
¤£Àß PÀtÚ°è PÀuÁÚV EgÀĪÉ
F ºÀÈzÀAiÀÄ EgÀĪÀ vÀ£ÀPÀ
£À¤ßà fêÀ£À zÉÆÃtÂAiÀÄ £ÀqɸÀĪÉAiÀiÁ
£Á«PÀ£ÁV §zÀÄPÀ ¸ÁUÀgÀ zÁn¸ÀĪÉAiÀiÁ?
¤Ã AiÀiÁgÉAzÀÄ UÉÆwÛ®è £À£ÀUÉ
DzÀgÉ ¥ÀÄlÖ PÀ£À¸ÀÄ EzÉ ªÀÄ£ÀzÀ M¼ÀUÉ
AiÀiÁªÁUÀ¯ÉÆà §gÀĪÀ UɼÉAiÀÄ£À §UÉUÉ PÀ£À¸ÀÄ £ÉÃAiÀÄÝ
ºÀÄqÀÄV
§AzÉà §gÀÄvÁÛ£É £À£Àß ¤jÃPÉëAiÀÄ
£Á£ÀAzÀÄPÉÆAqÀAvÉ



Thursday, February 09, 2012

ಬದುಕುವೆ ನಿನ್ನ ನಗುವಿನಲ್ಲಿ

ನಿನ್ನ ನಗುವಿನಲ್ಲಿ ಅಡಗಿದೆ
ನನ್ನೀ ಬದುಕು
ನಿನ್ನ ಕಿರುನಗುವಿನೊಂದಿಗೇ  ಬದುಕುವೆ..
ನಾನೂ ನಗುತ್ತ
ಭವಿಷ್ಯದ ಕನಸು ಕಾಣುತ್ತ
ನನ್ನ ಕಣ್ಣಿನಲ್ಲಿ ನಿನ್ನ ಬಿಂಬವ ತೆಗೆದು
ಬದುಕುವೆ ಕಣ್ಣ ನೋಡುತ್ತ
ಕೊನೆ ಉಸಿರಿರುವರೆಗೂ.....
ಬಂಧಿಸುವೆ ನಿನ್ನ ಹೃದಯದ 
ಗೂಡಿನಲ್ಲಿ
ಪ್ರೀತಿಯ ಮಾತಿನಲಿ...
ಸುಂದರ ಜೀವನದತ್ತ
ಒಲುಮೆಯ ಸೌಧದಲಿ.................






Friday, February 03, 2012


           ¹Ã-jAiÀÄ¯ï ¸ÉÆÖÃj
CAiÉÆå M¯É ªÉÄðlÖ ºÁ®Ä ¹ÃzÀÄ ºÉÆÃAiÀÄÄÛ. C£Àß £ÉÆÃrzÉæ UÀAf DV©nÖzÉ. JAzÀÄ ¥ÀPÀÌzÀ ªÀÄ£ÉAiÀÄ DAn PÀÆUÀÄwÛzÀÄÝzÀ£ÀÄß £ÉÆÃr £ÀªÀÄUÉ £ÀUÀÄ §AvÀÄ. KPÀAzÉæ D ¥ÀzÀUÀ¼À£ÀÄß £ÁªÀÅ ¥Àæw¢ªÀ¸ÀªÀÇ PÉüÁÛ E¢é. EzÀÄ ¥ÀPÀÌzÀ ªÀÄ£ÉAiÉÆAzÉ C®èzÉ £ÀªÀÄä ªÀÄ£ÉAiÀÄ PÀxÉÀAiÀiÁVvÀÄÛ. ¤dªÁVAiÀÄÆ ºË¢æ. F zsÁgÀªÁ» £ÉÆÃqÁÛ EzÉæ F ¯ÉÆÃPÀ£Éà ªÀÄgÉvÀÄ ºÉÆÃUÀÄvÀÛAvÉ .
         AiÀiÁªÀÅzÉà ªÀ¯ïØð PÀ¥sï EgÀ° , ©¹©¹ ¸ÀÄ¢Ý §A¢gÀ° , D ¸ÀªÀÄAiÀÄPÉÌ ¸ÀjAiÀiÁV ¹ÃjAiÀÄ¯ï £ÉÆÃqÀ¯Éà ¨ÉÃPÀÄ. zsÁgÀªÁ» eÉÆvÉ vÁªÀÇ C¼ÁÛ, PÉlÖ ¥ÁvÀæUÀ¼À£ÀÄß ¨ÉÊAiÀÄÄvÁÛ, M¼ÉîAiÀÄ ¥ÁvÀæUÀ¼À£ÀÄß vÀªÀÄUÉ ºÉÆð¹PÉƼÀÄîvÁÛ, D zsÁgÀªÁ» ªÀtð£ÉAiÉÆÃ,, CzÀÄ ªÀÄÄVzÀÄ ªÀÄÆgÀÄ UÀAmÉAiÀiÁzÀgÀÆ ªÀÄÄVAiÀÄzÀÄ CzÀgÀ PÀxÉ. CªÀgÀzÉà C©ügÀÄaAiÀÄ E£ÉÆߧâgÀÄ ¹PÀÌgÀAvÀÆ ªÀÄÄVzÉà ºÉÆìÄvÀÄ CªÀj§âgÉà ¸ÉÃj E£ÉÆßAzÀÄ zsÁgÀªÁ» ªÀiÁqÁÛgÉãÉÆà JAzɤ¸ÀÄvÀÛzÉ.

  CfÓAiÀÄÆ ¸ÀºÀ ºÉüÉÆÃzÀÄ £ÀªÀiï PÁ®zÀ°è EzɯÁè EgÀ°®è.£ÀªÀÄUÉ CzÀ£ÀÄß £ÉÆÃqÀ®Ä EµÁÖ£ÀÆ E¯Áè.J¯ÉÆèà ¸Àé®à mÉʪÀiï ¥Á¸ï UÉ £ÉÆÃrÛë JAzÀÄ ºÉüÁÛ£É ¹ÃvÉ zsÁgÀªÁ» CzÀÄ EzÀÄ CAvÁ Erà ¢£À £ÉÆÃqÁÛ¼É.

   ªÀÄzsÀåzÀ°è K£ÁzÀÄæ PÀgÀAmï ºÉÆÃzÀgÀAvÀÆ ªÀÄÄVzÉà ºÉÆÃAiÀÄÄÛ.D PÀgÀAmï UÉ K£ÁzÀÄæ Q« E¢ÝzÉæ EªÀgÀ ¨ÉÊUÀļÀ PÉý ¸ÀĸÉÊqï ªÀiÁqÉÆÌérÛvÉÛãÉÆÃ.CqÀÄUÉUÉ PÀgÀAmï E¯ÉÝà EzÀÄæ ¥ÀgÀªÁV®è. DzÀgÉ ¹ÃjAiÀįï UÉ ªÀiÁvÀæ EgÀ¯ÉèÉÃPÀÄ C£ÀÄßvÁÛgÉ PÉ®ªÀgÀÄ.  zsÁgÀªÁ» £ÉÆÃqÉÆà mÉʪÀiï £À°è £ÉAlgÉãÁzÀÄæ ªÀÄ£ÉUÉ §AzÀgÉ CªÀgÀ PÀıÀ¯ÉÆÃ¥Àj, HmÉÆÃ¥ÀZÁgÀ zsÁgÀªÁ» ªÀÄÄVzÀ §½PÀªÀµÉÖ. CµÀÄÖ ºÉÆvÀÄÛ CªÀgÀÆ ¸ÀºÀ ¸ÀĪÀÄä£É PÀĽvÀÄ £ÉÆÃqÀÄwÛgÀ¨ÉÃPÀÄ. £ÀAvÀgÀ D ¹ÃjAiÀÄ¯ï £À°è §gÀĪÀ M§â¼ÀÄ ¤ªÀÄä ªÀÄUÀ¼À vÀgÀºÀ EzÁÝ¼É JAzÀÄ ¹ÃjAiÀÄ¯ï £À §UÉΠ £ÉAlgÀ ºÀwÛgÀ NjAiÀÄAmÉñÀ£ï.

ªÀÄ£ÉAiÉįÁè ¸Àé®à ¸ÉʯÉAmï DVgÉÆà ºÉÆvÀÛAzÉæ zsÁgÀªÁ» §gÉÆà ºÉÆvÀÄÛ.CªÀgÀ£ÀÄß ©lÄÖ ¨ÉÃgÉAiÀiÁgÀÆ ªÀiÁvÀ£ÁqÀĪÀ ºÁV®è.E£ÀÄß AiÀiÁgÁzÀÄæ ZÁ£É¯ï ZÉÃAeï ªÀiÁqÀ®Ä §AzÀæAvÀÄ CªÀgÀzÀÄ PÀvÉAiÉÄ®è fêÀ£À.
     Erà ¢£À PÉ®¸À ªÀiÁr ¸ÀĸÁÛVgÉÆÃjUÉ F zsÁgÀªÁ» MAzÀÄ UɼÀwAiÉÄà ¸Àj.¥Àæw¢£ÀªÀÇ ªÀÄÄA¢£À ¨sÁUÀªÀ£ÀÄß ¤jÃQë¸ÀÄvÁÛ, »A¢£À ¨sÁUÀUÀ¼À£ÀÄß ªÉÄ®PÀÄ ºÁPÀÄvÁÛ EgÉÆÃjUÉ UÉÆvÀÄÛ D zsÁgÀªÁ»AiÀÄ ¸À«gÀÄa K£ÉAzÀÄ.
                
              

Sunday, January 22, 2012

ಅಜ್ಜಿಯಾದ ಕತೆ




MAzÁ£ÉÆAzÀÄ PÁ®zÀ°è MAzÀÆgÀ°è.. JAzÉà DgÀA¨sÀªÁUÀÄwÛzÀÝ CfÓAiÀÄ PÀvÉAiÀÄÄ AiÀiÁªÀÅzÉÆà ¤Ãw ¥ÁoÀzÉÆA¢UÉÆà fêÀ£À ªÀiË®åUÀ¼ÉÆÃA¢UÉÆà ªÀÄÄVAiÀÄÄwÛzÀݪÀÅ.¢£ÀzÀ J¯Áè ZÀlĪÀnPÉUÀ¼À°è PÀvÉAiÀÄÆ ¸ÀºÀ MAzÁVvÀÄÛ.gÁªÀiÁAiÀÄt ªÀĺÁ¨sÁgÀvÀzÀAvÀºÀ ¥ÁvÀæUÀ¼ÀÄ ªÀÄPÀ̼À ¥Á°£À »ÃgÉÆÃUÀ¼ÁVgÀÄwÛzÀݪÀÅ. CfÓ CfÓ PÀvÉ ºÉüÀfÓ JAzÀ PÀÆqÀ¯Éà MAzÀÄ ZÀÆgÀÆ ¨ÉøÀgÀ ªÀiÁrPÉƼÀîzÉ ºÉüÀÄwÛzÀݼÀÄ. Erà ¢£ÀªÀÇ AiÀiÁªÀÅzÉÆà PÉ®¸ÀUÀ½AzÀ¯ÉÆà CxÀªÁ E£ÁåªÀÅzÀjAzÀ¯ÉÆà §Æå¹AiÀiÁVgÀÄwÛzÀÝ CfÓUÀÆ ªÉƪÀÄäPÀ̽UÉ PÀvÉ ºÉüÀĪÀÅzÉAzÀgÉ CzÀÄ J°è®èzÀ ¦æÃw. vÁ£ÀÆ ªÀÄPÀ̼Éà J£ÀÄߪÀ ºÁUÉ ªÀwð¸ÀÄwÛzÀݼÀÄ. MmÁÖgÉ ªÀÄPÀ̼À ªÀiÁ£À¹PÀ ¨É¼ÀªÀtÂUÉ ¸ÀÄUÀªÀĪÁV ªÀÄ£ÉAiÀÄ ¥ÁoÀzÉÆA¢UÉ DUÀÄwÛvÀÄÛ.
   DV£À C¥Àà CªÀÄäA¢gÀÆ ¸ÀºÀ CfÓAiÀÄ PÀvÉUÀ½UÉ ¥ÉæÃgÉæ¸ÀÄwÛzÀÝgÀÄ. ªÀÄ£ÉUÉÆAzÀÄ »jAiÀÄ fêÀ EgÀ¨ÉÃPÉ£ÀÄߪÀÅzÀÄ J®ègÀ ¨sÁªÀ£ÉAiÀiÁVvÀÄÛ. ¸ÀjAiÀiÁzÀ ªÀiÁUÀðzÀ±Àð£ÀzÀ eÉÆvÉUÉ fêÀ£ÀzÀ C£ÀĨsÀªÀUÀ¼À£ÀÄß ºÉÆA¢gÀÄvÁÛgÉ D »jAiÀÄgÀÄ. ªÀÄPÀ̼À£ÀÄß  UÀĪÀÄä §gÀÄvÀÛzÉAiÉÄAzÀÄ ºÉzÀj¹ ªÀÄ®V¸ÀÄwÛzÀÝgÀÄ. FV£À ªÀÄPÀ̼ÀÄ  JµÀÄÖ §Ä¢ÝªÀAvÀjgÀÄvÁÛgÉ JAzÀgÉ UÀĪÀÄä£À£ÀÄß vÉÆÃj¸ÀÄ J£ÀÄßvÁÛgÉ.. CfÓAiÀÄ PÀvÉAiÉÄAzÀgÉ fêÀ E®èzÀ ªÀ¸ÀÄÛ«UÀÆ fêÀ vÀÄA© ¥ÁætÂUÀ¼É¯Áè ªÀiÁvÀ£ÁqÀĪÀ PÀvÉAiÀiÁVgÀÄwÛvÀÄÛ. £ÀªÀÄä AiÉÆÃZÀ£ÉUÀÆ ¤®ÄPÀzÀ CzÀÄâvÀ PÀ®à£É JAzÀgÉ vÀ¥ÁàUÀ¯ÁgÀzÀÄ.
CfÓ J¯ÁèzÀgÀÄ ºÉÆgÀl¼ÉAzÀgÉ ¸ÁPÀÄ CªÀ¼À »AzÉ ªÉƪÀÄäPÀ̼À zÀAqÀÄ. ºÀoÀ ªÀiÁrAiÀiÁzÀgÀÆ ¸ÀjAiÉÄà CfÓAiÀÄ eÉÆvÉUÉ ºÉÆÃUÀ¯ÉèÉÃPÀÄ. C¥Àà CªÀÄä¤VAvÀ®Æ CfÓAiÉÄà EµÀÖªÁVgÀÄwÛvÀÄÛ.
  EA¢£À PÁ®zÀ¯Éè¯Áè CfÓAiÀÄ eÉÆvÉUÉ ªÉƪÀÄäPÀ̼ÀÄ EgÀĪÀÅzÉà C¥ÀgÀÆ¥À. MAzÀÄ ªÉÃ¼É EzÀÝgÀÆ CfÓ £Á£É ¤AUÉ PÀvÉ ºÉüÀÄvÉÛãÉ. ¤Ã ºÉüÀĪÀ D PÁUÀPÁÌ UÀħâPÀÌ£À PÀvÉ AiÀiÁgÀÄ PÉüÁÛgÉ J£ÀÄߪÀ PÁ® §A¢zÉ. CfÓUÉà ¥Àæ±ÉßUÀ¼À£ÀÄß PÉý ¢PÁÌ¥Á¯ÁV¸ÀÄvÁÛgÉ. CzÀÄ ºÉÃUÉ, ¸ÉÊAn¦üPï jøÀ£ï EzÉAiÀiÁ JAzɯÁè PÉüÀÄvÁÛgÉ. E£ÀÄß ¥ÉÃmÉAiÀÄ°ègÉÆà ªÀÄPÀ̼ÀÄ C¥ÀgÀÆ¥ÀPÉÌAzÀÄ ªÀÄ£ÉUÉ §gÀÄvÁÛgÀµÉÖ. ºÀ½îAiÀÄ°ègÀĪÀ CdÓ CfÓAiÀÄjUÉ CªÀgÀªÀgÀÄ CªÀgÀªÀgÀ PÀvÉUÀ¼À£ÀÄß ºÉýPÉƼÀî¨ÉÃPÉà «£ÀB PÉüÀĪÀªÀgÀ ¸ÀASÉåAiÀÄAvÀÆ PÀrªÉÄAiÀiÁVzÉ. EA¢£À C¥Àà CªÀÄäA¢gÀÆ ¸ÀºÀ CfÓUÉ ºÉüÁÛgÉ ¤ªÀiï PÁ®zÀ ªÀÄÆqsÀ£ÀA©PÉUÀ¼À£É߯Áè CªÀgÀ vÀ¯ÉAiÀÄ°è vÀÄA§¨ÉÃr ºÉÆÃUÉÆà ºÉÆÃAªÀPïð ªÀiÁqÉÆÌà JAzÀÄ UÀzÀj¸ÀÄvÁÛgÉ . ¥Á¥À CªÀjUÉ MAzÀÄ ªÉÃ¼É PÉüÀĪÀ D¸ÀQÛ EzÀÝgÀÆ ©qÀ¨ÉÃPÁUÀÄvÀÛzÉ. MAzÀÄ C£ÀĨsÀ«Ã fëAiÀiÁzÀ CfÓAiÀÄ PÀvÉAiÀÄ£ÀÄß JµÀÄÖ «Ä¸ï ªÀiÁqÉÆ̼ÁÛ EzÁÝgÉ EA¢£À d£ÁAUÀ. ªÀÄÄAzÉÆAzÀÄ PÁ®PÉÌ CfÓ C£ÉÆßêÀÅî EjÛzÀèAvÉ CªÀ¼ÀÄ PÀvÉ J£ÉÆßÃzÀ£Àß ºÉýÛzÀîAvÉ CAvÁ §AzÀgÀÆ CZÀÑj¥ÀqÀ¨ÉÃQ®è.
   

Saturday, January 21, 2012

ಅವಳ ನಿರೀಕ್ಷೆ

ಪ್ರತೀ ನಾಳೆಗಾಗಿ ಕಾಯುವ ಕೆಲಸ ನಂದು
ನನ್ನವಳು ಬರಬಹುದೆಂದು
ಸಮುದ್ರದ ದಂಡೆಯ ಮೇಲೆ ಕುಳಿತು
ಹಡಗನ್ನು ನಿರೀಕ್ಷಿಸುತ್ತಿದ್ದೇನೆ
ಪ್ರತೀ ಹಡಗಿನಲ್ಲೂ ಹುಡುಕಾಡುತ್ತೇನೆ
ಎಷ್ಟೋ ವರುಷಗಳಿಂದ ಹುಡುಕುತ್ತಿದ್ದೇನೆ
ಅವಳ ಕಾಯುವಿಕೆಗಾಗಿ
ಭರವಸೆಯ ಹಡಗಿನ್ನೂ ಉಳಿದಿದೆ
ಮನದ ಮೂಲೆಯಲ್ಲಿ
ಅದೇ ಸೂರ್ಯ, ಅದೇ ಚಂದ್ರ
ನೋಡುವ ರೀತಿ ಬೇರೆಯಾಗಿದೆ ಅಷ್ಟೆ
ಎಲ್ಲವೂ ಶೂನ್ಯವೆನಿಸುತ್ತಿದೆ
ಅವಳ ಕಾಣದೆ
ತಾಯಿ ಕಳೆದು ಹೋದ ಮಗುವನ್ನು ಹುಡುಕುವ ತರಹ ಹುಡುಕುತ್ತಿದ್ದೇನೆ
ಓ ನಂತರ ಗೊತ್ತಾಯಿತು  ಅವಳು ಕುಳಿತ ಹಡಗು ಎಲ್ಲೋ
 ಕಾಣದಾಗಿದೆಯೆಂದು
ಮುಳುಗಿ ಹೋಗಿದೆಯೆಂದು ಮನ ಹೇಳಿದರೂ
ಭಾವನೆಯ ಹೃದಯ ಎನ್ನುತ್ತಿದೆ
ಅವಳಿನ್ನು ಇದ್ದಾಳೆಂದು,
ನೋಡುತ್ತೇನೆ ಯಾವಾಗ ಬರಬಹುದೆಂದು
ಕುಳಿತಿರುತ್ತೇನೆ ಅಲ್ಲಿಯೇ  ನಾನವಳ ನೋಡಿಲ್ಲ
ಆದರೂ ಗುರುತಿಸುತ್ತೇನೆ ಅವಳನ್ನು ಬಂದೊಡನೆ
 ಮಾತಿನಿಂದ
ಭಾವನೆಯಿಂದ........





Friday, January 20, 2012

ಹೇಗೆ ಸಹಿಸಲಿ ನಾ....

ಸಂಬಂಧಗಳ ಚಕ್ರವ್ಯೂಹದ ಸುಳಿಯಲಿ ಸಿಲುಕಿದೆ ಜೀವ
ಬರೀ ನೋವು ಬೇಗುದಿಗಳೆ ತುಂಬಿದೆ 
ಈ ಜೀವನ
ಜೊತೆಗಿರುವವರೆ ದ್ರೋಹ ಗೈದರೆ ,
ಸಹಿಸಲಿ ನಾ ಹ್ಯಾಂಗ
ಜನರ ಮಾತಿಗೆ ಸೊಪ್ಪು ಹಾಕುವುದೇಕೆ 
ಎನುತಿದೆ ಅಂತರಂಗ
ಗಾಳಿಮಾತಿನ ಕತೆ ನಿಜವಾದರೆ
ನನ್ನ ವಿಷಯದಲ್ಲೆಂದು ಅಳುಕಿದೆ ಮನ
ಹೇಳುವರು ತಿಳಿದವರು ಬರುವುದು
ಹಗಲು ಕತ್ತಲು ಕಳೆದು
ಆದರೆ ನನಗದು ಎಂದಿಗೂ ಸಿಗದ ಮರೀಚಿಕೆ
ಬೆಳಕು ಬರಿ ಮಿಥ್ಯೆ




( ನನ್ನ   ಫ್ರೆಂಡ್  ಗೆ ಈ ಸುಂದರ ಕವನ ಕಳುಹಿಸಿದ್ದಕ್ಕಾಗಿ  ಧನ್ಯವಾದಗಳು)

Monday, January 16, 2012

ಅಕ್ಕನ ಮದುವೆ

ಇಂದು ಮನೆಯೆಲ್ಲಾ ಸಂಭ್ರಮ ಸಡಗರ
ಮಾವಿನ ತೋರಣ ಸಿಂಗಾರ
ಹೊದಿಕೆಯಾಗಿದೆ ಚಪ್ಪರದಬ್ಬರ
ನಗುತ್ತಿದೆ ನೆಂಟರ ಬಳಗ
ಇಂದು ಅಕ್ಕನ ಮದುವೆ
ನಗಿಸುತ್ತಿದ್ದಾರೆ ಅವಳ ಕೀಟಲೆ ಮಾಡಿ
ನನಗೋ ಅಮ್ಮನಿಗೋ
ಅಕ್ಕನ ಕಳುಹಿಸಲಾರದ ಮನಸ್ಸು
ಬೇಡವೆಂದೆನಿಸುತ್ತಿದೆ
ಬೇರೆಯವರ ಮನೆಗೆ ಕಳುಹಿಸಲು,
ಅಮ್ಮನ ಕಣ್ಣಲ್ಲೂ ಮುಗ್ಧ ಪ್ರಶ್ನೆ
ಪ್ರೀತಿಯಿಂದ ಸಾಕಿದ ಮಗಳ ಹೇಗೆ ಕೊಡಲೆಂದು?
ನನ್ನ ಕೆಲಸಕ್ಕೆಂದೂ ಅಣಿಯಾಗುತ್ತಿದ್ದಳು
ಸ್ವಲ್ಪವೂ ಬೇಸರಿಸಿಕೊಳ್ಳದೆ
ಬದುಕ ಬಂಡಿ ಸಾಗಿಸಲು ಹೊರಟಿದ್ದಾಳೆ
ಅವನೇಗೆ ನೋಡಿಕೊಳ್ಳುತ್ತಾನೋ 
ನನ್ನ ಮುಗ್ಧ ಅಕ್ಕನನ್ನು
ನಮ್ಮ ಮನೆಯೀಗ ಗದ್ದಲ,ತುಂಟಾಟಗಳಿಂದ 
ನಲಿಯದೆ ಮೌನವಾಗಿದೆ
ಅವಳ ಜಗಳ,ಹಠವೆಲ್ಲಾ ಇಲ್ಲಿಯೇ ಕೊನೆ
ಎಂದೂ ಜಗಳ ಮಾಡುತ್ತಿದ್ದ ಅಕ್ಕ
ಇನ್ನೆಂದೂ ಜಗಳ ಮಾಡಬಾರದು
ಆಟವಾಡಲೂ ಬರುವುದಿಲ್ಲವಂತೆ,
ಇನ್ನು ಅವಳದೇ ಪ್ರಪಂಚ,
ಜವಾಬ್ದಾರಿ ಎಂಬ ಭಾರದ ಜಗತ್ತು
ಕೊನೆಯ ಬಾರಿ ಅವನ ಹೆಂಡತಿ ಆಗುವ ಮೊದಲು
ಅಕ್ಕನನ್ನು ಹೊಡೆದು, ಜಗಳವಾಡಿ, ತಬ್ಬಿಕೊಂಡು ಅಳಬೇಕು
ಇನ್ನೆಂದೂ ಅವಳು ಮೊದಲಿನ ಹಾಗೆ ಇರಲಾಗದು
ನಮಗೇನಿದ್ದರೂ ಅವಳು ನೆರಳು ಮಾತ್ರ.....









Thursday, January 12, 2012

ಎಲ್ಲಿಯೋ ಸಾಗುತ್ತಿದ್ದೇನೆ.......


ಒಂಟಿ ಮುದುಕಿ
ಎಲ್ಲಿಯೋ ಸಾಗುತ್ತಿದ್ದೇನೆ..
ಗೊತ್ತೂ ಇಲ್ಲ, ಗುರಿಯೂ ಇಲ್ಲ
ಈ ಊರು ಯಾವುದೆಂದು ತಿಳಿದಿಲ್ಲ,
ಎರಡು ಮಕ್ಕಳಿದ್ದರೂ ನೋಡಿಕೊಳ್ಳುವವರಿಲ್ಲ
ನನ್ನ ಬದುಕ ಬಂಡಿಗೆ ಇರುವುದು
ಒಂದೇ ಚಕ್ರ
ಎಷ್ಟು ದೂಡಿದರೂ ಮುಂದೆ ಹೋಗುತ್ತಿಲ್ಲ
ಅವರೋ ಬಿಟ್ಟು ಹೋದರು ನನ್ನ
ಮರಳಿ ಬಾರದ ಊರಿಗೆ
ಮಕ್ಕಳಿಗೂ ಈ ಮುದುಕಿಯ
ಬಾಧೆ ಬೇಡವಾಗಿದೆ.
ನೆನಪಾಗುತ್ತಿದೆ
ಮಕ್ಕಳಿಗೆ ಚಂದಮಾಮನನ್ನು ತೋರಿಸಿ
ಉಣ್ಣಿಸಿದ ದಿನ
ನಡೆಯುವಾಗ ,ಬಿದ್ದಾಗ ಏಳಿಸಿದ
ದಿನ
ಬೈದು ಹೊಡೆದು ಅಕ್ಷರ ಹೇಳಿಕೊಟ್ಟ ನೆನಪು..
ಇಂದು ಅವರಿಗೆ ಬೇಡವಾದೆ ನಾ..
ನನ್ನ ಸಾಕದಿದ್ದರೇನಂತೆ
ಹೇಗೋ ಬದುಕುತ್ತೇನೆ
ಅವರೆಂದೂ ಚೆನ್ನಾಗಿರಲಿ
ಎಂಬುದೇ ನನ್ನ ಜೀವನದ ಕನಸು





Tuesday, January 10, 2012

ಮನೆಯೆಂಬ ಮಾಯಾಜಾಲ

ಎಲ್ಲಿ ಒಳ್ಳೆಯ ಕಾಲೇಜ್ ಗಳಿವೆಯೋ ಅಲ್ಲಿ ಗಂಟು ಮೂಟೆ ಹೊತ್ತು ಗೊತ್ತಿರದ ಊರಲ್ಲಿ  ನೆಲೆ ನಿಲ್ಲುವುದು ನಮ್ಮ ಗುಣ.. ಏನಾಗಲಿ ಮುಂದೆ ಸಾಗು ನೀ.. ಎಂದುಕೊಂಡು ಇರುತ್ತೇವೆ.ನಮ್ಮದೇ ಗೆಳತಿಯರ ದಂಡು, ನಮ್ಮದೇ ಕಾಲೇಜು, ತಪ್ಪಿದಾಗ ಹೇಳಿಕೊಡುವ ಗುರುಗಳು ಎಲ್ಲವೂ ಇರುತ್ತದೆ..ಆದರೂ ಕಾಡುತ್ತದೆ. ಹೋಮ್ ಸೀಕ್ ನೆಸ್. ಖಂಡಿತವಾಗಿಯೂ ಇದೊಂದು ಮನೆಯ ಖಾಯಿಲೆ. ಅದರಲ್ಲೂ  ನಾನು ರಜೆಯ ದಿನಗಳು ಬರುತ್ತವೆಯೆಂದರೆ ಮನೆಗೆ ಹೋಗುವ ಕನಸು ಕಾಣುವುದರಲ್ಲಿ ನಿಪುಣೆ. 

ಹೋಗಲು ಹದಿನೈದು ದಿನಗಳಿರುವಾಗಲೇ ಪರೀಕ್ಷೆಗೆ ಓದುವ ಟೈಮ್ ಟೇಬಲ್ ಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತದೆ.ನನ್ನ ಹೋಮ್ ಸೀಕ್ ಅನ್ನು ಬಿ.ಎಸ್.ಎನ್ ಎಲ್ ನ ಮನೆಗೆ ಫ್ರೀ ಕಾಲ್ ಸ್ವಲ್ಪ ಕಡಿಮೆ ಮಾಡಿದೆ. ನಮ್ಮ ಕೆಲವು ಸ್ನೇಹಿತೆಯರು ಮನೆಯಿಂದ ಬರುವುದನ್ನು ನೋಡಿ ಛೇ ಈ ಕಾಲೇಜು ನಮ್ಮ ಮನೆಯ ಹತ್ತಿರ ಇರಬೇಕಿತ್ತು.ಇಲ್ಲವೇ ನಮ್ಮ ಮನೆಯೇ ಇಲ್ಲಿ ಇರಬೇಕಿತ್ತು ಎಂದು ಅನಿಸದೆ ಇರುವುದಿಲ್ಲ. 

ಅದೇಕೋ ಗೊತ್ತಿಲ್ಲ. ಚಿಕ್ಕಂದಿನ ಆಟಗಳು ಪಾಠಗಳೆಲ್ಲಾ , ತುಂಟತನದ ಮಾತುಗಳೆಲ್ಲವೂ ಹೋಮ್ ಸೀಕ್ ಆಗಿಯೆ ಕಾಡುತ್ತಿರುತ್ತದೆ. ಪಕ್ಕದ ಮನೆಯ ಆಂಟಿಯ ಮಗಳು ಯಾವುದಾದರೊಂದಕ್ಕೆ ಹಠ ಮಾಡಿದಾಗ ನಾನೂ ಚಿಕ್ಕವನಿದ್ದಾಗ ಅದೆಷ್ಟು ಹಠಮಾರಿಯಾಗಿದ್ದೆ. ಪೇಟೆಗೆ ಕರೆದುಕೊಂಡು ಹೋಗಲು ಅಮ್ಮ ಹೆದರುತ್ತಿದ್ದಳು.ಏಕೆಂದರೆ ಪ್ರತೀಸಲವೂ ಮನೆಯಿಂದ ಒಂದು ಒಪ್ಪಂದ ಮಾಡಿಕೊಂಡು ಹೋದರೆ ಅಲ್ಲಿ ಹೋದ ನಂತರ ಬೇರೆಯೇ ಪರಿಸ್ಥಿತಿಯಾಗಿರುತ್ತಿತ್ತು.

 ಶಾಲೆಗೆ ಹೋಗುವ ಪುಟ್ಟ ಮಕ್ಕಳು ಟಾಟಾ ಮಾಡುವುದನ್ನು ನೋಡಿದರೆ ನಾನೂ ಟಾಟಾ ಮಾಡಿ , ಒಂದೊಂದು ಬಾರಿ ಸಿಟ್ಟಿನಿಂದ ಹೋಗುತ್ತಿದ್ದ ದಿನಗಳು, ಜಾತ್ರೆ ಬಂದಾಗ ಅಪ್ಪನ ಹತ್ತಿರ ಒಳ್ಳೆಯ ಮಾತುಗಳನ್ನಾಡಿ  ತೆಗೆಸಿಕೊಳ್ಳುತ್ತಿದ್ದ ಆಟಿಕೆ ಸಾಮಾನುಗಳು, ಅಣ್ಣನ ಹತ್ತಿರ ಜಗಳ ಮಾಡಿ ಸ್ವಲ್ಪ ಹೊತ್ತಿಗೇ ಸಾರಿ ಕೇಳಿದ್ದು, ಅಜ್ಜ,ಅಜ್ಜಿಯ ಹತ್ತಿರ ಮುದ್ದು ಮಾಡಿಸಿಕೊಂಡ ಅವುಗಳೆಲ್ಲಾ ಪ್ರತೀ ದಿನವೂ ಬೇಕೆಂದೆನಿಸುತ್ತದೆ.ಮನೆಗೆ ಹೋದಾಗ ಗಡಿಯಾರದ ಮುಳ್ಳು ಎಷ್ಟು ಮೋಸ ಮಾಡುತ್ತದೆ.ಎಂದೂ ಓಡದ ಮುಳ್ಳು ಆಗ ಜೋರಾಗಿ ಓಡುತ್ತದೆ.

ಮನೆಯೆಂದರೆ ಎಲ್ಲರಿಗೂ ಹಾಗೆ,ಪ್ರತೀ ಯುಗಾದಿಗೂ ಪ್ರತೀ ದೀಪಾವಳಿಗೂ, ಸಣ್ಣ ಸಣ್ಣ ಹಬ್ಬ ಹುಣ್ಣಿಮೆಗಳನ್ನು ಮನೆಯಲ್ಲಿಯೇ ಆಚರಿಸಬೇಕೆಂದೆನಿಸುತ್ತದೆ..ಹೇಗಿದ್ದರೂ ನಮ್ಮ ಊರು, ನಮ್ಮ ಮನೆ ನಮಗೆ ಚಂದವಲ್ಲವೇ?ಅದೆಷ್ಟು ಸುಂದರ ,ಅದ್ಭುತ ಎಂದೆನಿಸುತ್ತದೆ.. ಎಲ್ಲೇ ಹೋದರೂ ನಮ್ಮ ಊರಿನ ಕಡೆಯವರು ಸಿಕ್ಕರೆ ಸಾಕು. ಮುಖ ಅರಳಿಸಿ ಮಾತನಾಡಿಸಲೇಬೇಕೆಂದೆನಿಸುತ್ತದೆ..ನಮ್ ಊರಿನ ಬಸ್ ಹೆಸರು ನೋಡಿದ್ರು ಅದೆಷ್ಟು ಖುಷಿಯಾಗುತ್ತದೆ. ..ಆದರೂ ಪ್ರತೀ ಸಾರಿ ಮನೆಗೆ ಹೋದಾಗಲೂ ನನ್ನೂರಿನಲ್ಲಿ ಅದೆಷ್ಟು ಬದಲಾವಣೆಯಾಗಿರುತ್ತದೆ.. ನಾಲ್ಕಾಣೆಯ ಚಾಕಲೇಟ್ ಗಳೆಲ್ಲಾ ಬಂದಾಗಿರುತ್ತದೆ. ಐಸ್ಕ್ ಕ್ಯಾಂಡಿ ಮಾರುವವನ ಸದ್ದೇ ಇಲ್ಲ. ನಮ್ಮ ಬಾಲ್ಯದ ಸ್ನೇಹಿತರೆಲ್ಲಾ ಅವರವರ ಕೆಲಸದಲ್ಲಿ ಬ್ಯೂಸಿ. ಅಮ್ಮನ ಅಡುಗೆಗೆ ಬೈಯ್ಯುತ್ತಿದ್ದ ದಿನಗಳೆಲ್ಲಾ ಮರೆತು ಹೋಗಿ, ದಿನವೂ ಅವಳ ಅಡುಗೆಯೇ ತಿನ್ನಬೇಕೆಂದೆನಿಸುತ್ತದೆ.ಅದೇನೋ ಗೊತ್ತಿಲ್ಲ.ದೂರ ಇರುವಾಗಲೇ ಅದರ ಬೆಲೆ ಗೊತ್ತಾಗುತ್ತದೆ.ಎಂದು ಹೇಳುವ ಮಾತು ಎಷ್ಟು ಸತ್ಯ ಅಲ್ವಾ?

Friday, January 06, 2012

ಅವಳ ನೆನಪು...

ಸಂಜೆಯ ಸೂರ್ಯ ತರಿಸಿದ್ದ  ಅವಳ ನೆನಪ,
ಹಳೆಯ ಆಟ ಓಟ ಎಲ್ಲವೂ ಮನ ಕದಡುತ್ತಿತ್ತು
ಅವಳು ಪರಿಚಯವಾದ ಆ ದಿನವು ಕಣ್ಣೆದುರೆ ಮರುಕಳಿಸುವಂತಿತ್ತು
ಆಡ ಹೊರಟ ಮಾತೆಲ್ಲಾ ಕಣ್ಣೀರೇ ಆಗುತಲಿತ್ತು
ನನ್ನ ಬದುಕನ್ನೆಲ್ಲಾ ಸಮುದ್ರದ ಅಲೆ ತೇಲಿಸಿಕೊಂಡೊಯ್ದಿತ್ತು
ನನ್ನವಳನ್ನು ಬಾಚಿಕೊಂಡ ಆ ಸಮುದ್ರ 
ಬದುಕಲ್ಲಿ ಎಂದೂ ನಿಲ್ಲದ ಬಿರುಗಾಳಿಗೆ
ಕಾರಣವಾಗಿತ್ತು...

ಜೊತೆಯಲಿರಲೇ ಗೆಳೆಯ

ರಾಗವಾಗಲೇ ನೀ ಬರೆದ ಹಾಡಿಗೆ
ಬರೆಯಲೇ ನಿನಗೊಂದು ಪ್ರೀತಿಯ ಪತ್ರವಾ
ಮುನಿಸಾಗಲೇ ನಿನ್ನ ಕೋಪದ ಸೆಳೆತಕೆ,
ಆಗಲೇ ನಿನ್ನ ಜೊತೆಗೆ ಜೋಡಿತಾರೆ
ಬಣ್ಣವಾಗಲೇ ನಿನ್ನ ಮದರಂಗಿ ಚಿತ್ರಕೆ
ರೆಪ್ಪೆಯಾಗಲೇ ನಿನ್ನ ಕಣ್ಣಂಚಿನಲಿ,
ಕೂಗಿ ಕರೆಯಲೇ ನಿನ್ನ ಹೆಸರ
ಮಾತನಾಡಿಸಲೇ ನಿನ್ನ ಮೌನದ ಮನವ
ಇರಲೇ ಗೆಳೆಯಾ
 ಜೊತೆಯಲಿ,
ಬದುಕಿನುದ್ದಕ್ಕೂ ದಾರಿಯಲಿ..